IT for Change
ಕಥೆ ಖಜಾನೆ - ಕನ್ನಡದ
2023-24ರ ಅವಧಿಯಲ್ಲಿ ಕರ್ನಾಟಕ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್ಇಆರ್ಟಿ), ಐಟಿ ಫಾರ್ ಚೇಂಜ್ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ನಡೆಸಿದ 'ಭಾಷಾ ಶಿಕ್ಷಣದಲ್ಲಿ ಡಿಜಿಟಲ್ ಕಥೆ-ಆಧಾರಿತ ಬೋಧನ ವಿಧಾನದ ಅಳವಡಿಕೆ' ಕರ್ಯಕ್ರಮದ ಅಡಿಯಲ್ಲಿ ನಡೆಸಿದ ಕಾರ್ಯಾಗಾರಗಳ ಭಾಗವಾಗಿ ಈ ಆಡಿಯೋ ಕಥೆಗಳನ್ನು ಕರ್ನಾಟಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ತಯಾರಿಸಿದ್ದಾರೆ. ಕಥೆ ಹೇಳುವಿಕೆಯ ಶಕ್ತಿಯ ಜೊತೆಗೆ ಡಿಜಿಟಲ್ ಮಾಧ್ಯಮವು ನೀಡುವ ಹೊಸ ಸಾಧ್ಯತೆಗಳ ಮೂಲಕ ಮಕ್ಕಳ ಭಾಷಾ ಕಲಿಕೆಯನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ. ಎಲ್ಲಾ ಕಥೆಗಳು ಮುಕ್ತ ಶೈಕ್ಷಣಿಕ ಸಂಪನ್ಮೂಲಗಳಾಗಿದ್ದು (OER) ಮುಕ್ತವಾಗಿ ಬಳಸಬಹುದು ಮತ್ತು ಹಂಚಿಕೊಳ್ಳಬಹುದು.
Author
IT for Change
Category
Podcast website
Latest episode
Sep 10, 2025
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
ದೊಡ್ಡ ಶ್ರೀಮಂತ ಯಾರು? 10.09.2025 3:43
Writer : ಜಿ.ಎಂ. ಜ್ಯೋತಿ Narrator : ಜಿ.ಎಂ. ಜ್ಯೋತಿ Editor : ಮಾಯಾದೇವಿ ತುರಂಗ ಹಳ್ಳಿಯ ಹೊರಭಾಗದಲ್ಲಿ, ದಾರಿಯ ಪಕ್ಕದಲ್ಲಿರುವ ಮರದ ಕೆಳಗೆ ಕುಳಿತಿರುವ ಋಷಿಮುನಿ ಏಕಾಂತದಲ್ಲಿ ಧ್ಯಾನಸ್ಥನಾಗಿದ್ದ. ಆ ದೇಶದ ಸಾಮ್ರಾಟನಿಗೆ ಗೌರವ ಸಲ್ಲಿಸದ ಋಷಿಮುನಿಯ ಮೇಲೆ ಸಾಮ್ರಾಟನಿಗೆ ಮುಜುಗರ ಮತ್ತು ಕೋಪ. ಋಷಿಮುನಿ ಮತ್ತು ಸಾಮ್ರಾಟನ ನಡುವೆ ನಡೆದ ದೊಡ್ಡ ಶ್ರೀಮಂತ ಯಾರು ಎಂಬ ಸಂಭಾಷಣೆನ್ನು ಈ ಕಥೆಯ ಮೂಲಕ ಕೇಳಿ. ೧. ಶಬ್ದ ಪದಗಳ ಆಟ ಆಡಿಸುವುದು ( ಕಥೆಯಲ್ಲಿ ಬರುವ ಹೊಸ ಪದಗಳನ್ನು ಗುರುತಿಸಿ, ಅದರ ಅ...
ತಪ್ಪು ಉತ್ತರ 10.09.2025 2:43
Writer : ರಾಘವೇಂದ್ರ ಕುಲಕರ್ಣಿ Narrator : ರಾಘವೇಂದ್ರ ಕುಲಕರ್ಣಿ, ಕನ್ಯಾಕುಮಾರಿ ಪಾಟೀಲ್ Editor : ಭಾಗ್ಯಶ್ರೀ ಕಾಡಿನಲ್ಲಿ ಒಂದು ಮರವಿತ್ತು. ಅಲ್ಲಿನ ಕೋಗಿಲೆಯ ಹಾಡು ಅತಿ ಮಧುರ. ಆದರೆ ಬೇರೆ ಪಕ್ಷಿಗಳಿಗೆ ತೊಂದರೆಯಾಗುತ್ತಿತ್ತು. ಆ ಪಕ್ಷಿಗಳು ಏನು ಮಾಡಿದವು ಮತ್ತು ಕೋಗಿಲೆಯು ಎರಡನೆಯ ಕೋಗಿಲೆಗೆ ಏನು ಹೇಳಿರಬಹುದು ಎಂದು ತಿಳಿಯಲು, ಈ ಕಥೆಯನ್ನು ಕೇಳಿ. ೧. ಪಕ್ಷಿಗಳ ಶಬ್ಧವನ್ನು ಕೇಳಿಸಿ , ಗುರುತಿಸುವುದು. ೨. ಕಥೆಯನ್ನು ಕೇಳಿ, ಚಿತ್ರವನ್ನು ಬಿಡಿಸುವುದು. ಇವರಿ...
ಡಾ ಬಾಬು ರಾಜೇಂದ್ರ ಪ್ರಸಾದ್ 10.09.2025 3:43
Writer : ಡಿಎಸ್ಇಆರ್ಟಿ ಪಠ್ಯಪುಸ್ತಕ Narrator : ಕಲ್ಲೇಶ್ವರಪ್ಪ Editor : ಕುಮಾರ್ ವೈ ಒಂದು ದಿನ ಹಿರಿಯ ವ್ಯಕ್ತಿಗಳು ಕೆಲಸ ಮುಗಿಸಿ ಮನೆಗೆ ಬಂದರು. ಪುಸ್ತಕದ ಹಲವು ಪುಟಗಳು ಹರಿದು ಬಿದ್ದಿರುವುದನ್ನು ಕಾಣುವರು. ಇದೆಲ್ಲ ಮಕ್ಕಳ ಕೆಲಸ ಎಂದು ತಿಳಿಯುವರು. ಮಕ್ಕಳಿಗೆ ಪುಸ್ತಕದ ಪ್ರಾಮುಖ್ಯತೆಯನ್ನು ತಿಳಿಸಲು ಏನು ಉಪಾಯ ಮಾಡಿರಬಹುದು! ಆ ಮಕ್ಕಳಿಗೆ ಅರಿವು ಮೂಡಿಸಿದ ಮಹಾನ್ ವ್ಯಕ್ತಿ ಯಾರಿರಬಹುದು! ಕುತೂಹಲಕಾರಿ ಕಥೆಯನ್ನು ಕೇಳಿರಿ. ೧. ತಮಗೆ ಇಷ್ಟವಾದ ಪುಸ್ತಕಗಳನ್ನು ಹೆಸರಿಸುವುದು, ಮತ್...
ಜೇಡರ ಬಲೆ 10.09.2025 2:52
Writer : ರಾಘವೇಂದ್ರ ಕುಲಕರ್ಣಿ Narrator : ರಾಘವೇಂದ್ರ ಕುಲಕರ್ಣಿ Editor : ಬಸವರಾಜ ಪಾವಲೆ ಹಿಂದೆ ಒಬ್ಬ ಚಕ್ರವರ್ತಿ ಶಿವಾಜಿ ಮಹಾರಾಜ ರಾಜ್ಯವನ್ನು ಆಳುತ್ತಿದ್ದ. ಶತ್ರು ಪಕ್ಷದವರೊಂದಿಗೆ ಸೋಲು ಉಂಟಾಗುತ್ತದೆ. ಆತ ನಿಸ್ಸಹಾಯಕನಾಗುತ್ತಾ, ಮುಂದೆ ಆತ ಏನು ಮಾಡಿರಬಹುದು? ಯಾರಿಂದ ಪ್ರೇರೇಪಿತನಾಗಿರಬಹುದು ಎಂಬುವುದನ್ನು ಈ ಕಥೆಯ ಮೂಲಕ ತಿಳಿಯಬಹುದು. ೧. ಶಿವಾಜಿ ಚಿತ್ರವನ್ನು ಬಿಡಿಸುವುದು ಮತ್ತು ಚಾರ್ಟ್ ನಲ್ಲಿ ಅಂಟಿಸಿ ಅವರ ವಿಚಾರಗಳನ್ನು ಬರೆಯುವುದು. ೨. ಸೋಲು ಮತ್ತು ಗೆ...
ಚಿಟ್ಟೆಯ ಮುಗುಳುನಗೆ 10.09.2025 6:16
Writer : ಮಾತಂಗಿ ಸುಬ್ರಮಣಿಯನ್ Narrator : ಲಲಿತಾ, ಕನ್ಯಾಕುಮಾರಿ ಪಾಟೀಲ್, ಯಶವಂತ ಕಾಳೆ, ಲಕ್ಷ್ಮಿ Editor : ವಿಜಯ ಕುಮಾರ್ ಕಾವ್ಯಳ ಕುಟುಂಬ ಇತ್ತೀಚೆಗಷ್ಟೆ ಹಳ್ಳಿಯಿಂದ ಬೆಂಗಳೂರಿಗೆ ಬಂದು ನೆಲೆಸಿದೆ. ತರಗತಿಗೆ ಅವಳು ಹೊಸಬಳು. ಅವಳು ಚಿಟ್ಟೆಗಳ ವನಕ್ಕೆ ಭೇಟಿ ಇತ್ತಾಗ ತನಗೂ ಚಿಟ್ಟೆಗಳಿಗೂ ಇರುವ ವಿಶೇಷ ನಂಟನ್ನು ಮನಗಾಣುತ್ತಾಳೆ. ಅವಳಿಗೆ ಹೊಸ ಗೆಳೆತನವೂ ದೊರೆಯುತ್ತದೆ. ೧.ಮಕ್ಕಳಿಗೆ ಕ್ರಿಮಿಕೀಟಗಳ ಪಟ್ಟಿಯನ್ನು ಮಾಡುವಂತೆ ತಿಳಿಸುವುದು. ೨. ವನಕ್ಕೆ ತೆರಳಿದಾಗ ಆಗುವ ಅನುಭವಗಳನ...
ಚಿಂಟುವಿನ ಸಾಹಸ 10.09.2025 5:30
Writer : ಪ್ರದೀಪ್ ಕೆ Narrator : ಕೌಸರ್ ಬಾನು ಆರ್ Editor : ಶಿವರಾಜ ವಿ ಎ ಹಳ್ಳಿಯಲ್ಲಿ ಸಣ್ಣ ಮಕ್ಕಳು ಕಣೆಯಾಗುತ್ತಿರುತ್ತಾರೆ, ಚಿಂಟು ಹೇಗೆ ಆ ಕಳ್ಳರನ್ನ ಪತ್ತೆ ಮಾಡುತ್ತಾನೆ ಅಂತ ತಿಳಿಯಲು ಈ ಕಥೆ ಓದಿ. ೧. ಕಣ್ಣ ಮುಚ್ಚಾಲೆ ಆಟ ಆಡಿಸುವುದು. ೨. ಎರಡು ಒಂದೇ ರೀತಿಯ ಚಿತ್ರವನ್ನು ನೀಡಿ ವ್ಯತ್ಯಾಸವನ್ನು ಗುರುತಿಸುವುದು. ಇವರಿಗೆ ಸೂಕ್ತ : ಪ್ರಾಥಮಿಕ ಹಂತ ಕಥಾವಸ್ತು : ಜೀವನ ಕೌಶಲ್ಯ,ಸಾಹಸ ಗುರುತು ಪಟ್ಟಿ : ತರಗತಿ ೧,ತರಗತಿ ೨,ತರಗತಿ ೩,ತರಗತಿ ೪ ಕಥೆಯ ಚಟುವಟಿಕೆ ಪುಟಕ್ಕೆ ಇಲ...
ಚಿಂಕಿ ಮಿಂಕಿ 10.09.2025 6:37
Writer : ಸುಜಾತಾ ಎಸ್ ಎ Narrator : ಸುಜಾತಾ ಎಸ್ ಎ Editor : ಮಾಯಾದೇವಿ ತುರಂಗ ಅಮ್ಮ ಚಿಂಕಿ ಮಿಂಕಿಯರನ್ನು ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗಲು ತಯಾರಿ ಮಾಡುತ್ತಿದ್ದರು.ಶಾಲೆಯಲ್ಲಿ ಮಿಸ್ ಹೇಳುವ ಪಾಠಗಳನ್ನು ಕೇಳುತ್ತಾ, ಮನೆಗೆ ಮರಳಿದ ನಂತರ ಶಾಲೆಯಲ್ಲಿ ನೀಡುವ ಮನೆಕೆಲಸವನ್ನು ಮಾಡುತ್ತಿದ್ದರು. ಯಾಂತ್ರಿಕ ಪ್ರಪಂಚವನ್ನೇ ನೋಡುತ್ತಿದ್ದ ಚಿಂಕಿ ಮಿಂಕಿಯರು ಅಪ್ಪ ಅಮ್ಮನ ಜೊತೆ ಹಳ್ಳಿಗೆ ಹೋಗುವರು. ಹಳ್ಳಿಯ ತೋಟಕ್ಕೆ ಹೋದ ಚಿಂಕಿ ಮಿಂಕಿಯರು ತೋಟದಲ್ಲಿ ಏನು ಮಾಡುವರು? ಅಲ್ಲಿನ ಪರಿಸರದ ಜೊತೆ...
ಘುಂ ಘುಂ ಘರಿಯಾಲಿಯ ಅದ್ಬುತ ಸಾಹಸ 10.09.2025 7:54
Writer : ಅಪರ್ಣಾ ಕಪೂರ್ Narrator : ಮಲ್ಲಿಕಾರ್ಜುನಪ್ಪ. ಹೆಚ್.ಒ. Editor : ಮಹಮದ್ ಖಯೇದ್ ಕೆ ಘುಮ್-ಘುಮ್ ಘರಿಯಾಲಿ ಮೊದಲ ಬಾರಿಗೆ ಈಜಲು ಹೋದಾಗ, ತನ್ನ ಕುಟುಂಬವು ತನ್ನನ್ನು ಬಿಟ್ಟು ಈಜಿ ಹೋಗಿರುವುದರ ಅರಿವಾಯಿತು. ಅವರನ್ನು ಆಕೆ ಹುಡುಕುತ್ತಾಳೆಯೇ? ನೀವೂ ಘುಮ್-ಘುಮ್ ಜೊತೆಗೆ ಗಂಗಾ ನದಿಯಲ್ಲಿ ಈಜಿ ದಾರಿಯುದ್ದಕ್ಕೂ ಅದ್ಭುತವಾದ ಜೀವಿಗಳನ್ನು ಭೇಟಿ ಮಾಡಿ. ೧. ನೀರಿನಲ್ಲಿ ವಾಸಿಸುವ ಜೀವಿಗಳನ್ನು ಹೆಸರಿಸುವುದು. ಇವರಿಗೆ ಸೂಕ್ತ : ಪ್ರಾಥಮಿಕ ಹಂತ ಕಥಾವಸ್ತು : ಕುಟುಂಬ,ಪ್ರಾಣಿ ಮತ...
ಗೆಳೆತನ 10.09.2025 3:41
Writer : ಸ್ವಂತ ಕಥೆ Narrator : ಶಹನಾಜ್ ಬೇಗಂ, ರೋಹಿಣಿ Editor : ಪ್ರೇಮಾ ಪಿ ಸ್ವಾಮಿ ಕುದುರೆ ಮತ್ತು ಒಂಟೆ ಒಳ್ಳೆಯ ಸ್ನೇಹಿತರು. ಇಬ್ಬರ ನಡುವೆ ಯಾರು ಹೆಚ್ಚು ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಆನೆಯ ಬಳಿ ಹೋಗುವರು. ಆನೆಯ ಉಪಾಯ ಹೇಗಿತ್ತು? ಮತ್ತು ಸ್ನೇಹಿರ ಪ್ರಶ್ನೆಗೆ ಹೇಗೆ ಪರಿಹಾರ ಸಿಕ್ಕಿತು? ಈ ಕಥೆಯನ್ನು ಓದಿ ತಿಳಿಯಿರಿ. ೧. ತನ್ನ ಸ್ನೇಹಿತರ ಹೆಸರನ್ನು ಕಾಗದದಲ್ಲಿ ಬರೆಯುವುದು. ೨. ಸ್ನೇಹಿತರ ಬಗ್ಗೆ ಮಾತನಾಡುವುದು. ೩. ಸ್ನೇಹಕ್ಕೆ ಇರಬೇಕಾದ ಗುಣಲಕ್ಷಣಗಳನ್ನು ಪ...
ಗಾಳಿಯಾ ಬಲಾಬಲ 10.09.2025 1:50
Writer : ಅಂಜಲಿ ವೈದ್ಯ Narrator : ರಂಗಪ್ಪ ಕೆ.ವಿ Editor : ನಟೇಶಕುಮಾರ್ ಆರ್ ಜಿ ರೆಕ್ಕೆಗಳು, ಗಾಳಿಪಟಗಳು ಮತ್ತು ಹವಾಯಂತ್ರಗಳಲ್ಲಿ ಸಮಾನವಾಗಿರುವುದು ಏನು? ಇವುಗಳಲ್ಲಿ ಪ್ರತಿಯೊಂದೂ ಗಾಳಿಯ ನೆರವಿನಿಂದ ಚಲಿಸುತ್ತವೆ! ೧.ಗಾಳಿಪಟ ತಯಾರಿಸಿ ಆಕಾಶದೆತ್ತರ ಹಾರಲು ಬಿಡುವುದು. ೨. ಬಲೂನಿಗೆ ಗಾಳಿ ಊದಿ ಅದು ಹೇಗೆ ಚಲಿಸುತ್ತದೆ ಎಂದು ಗಮನಿಸುವುದು. ೩. ಕಥೆಯನ್ನು ತಮ್ಮದೇ ಶೈಲಿಯಲ್ಲಿ ಹೇಳುವುದು. ಇವರಿಗೆ ಸೂಕ್ತ : ಪ್ರಾಥಮಿಕ ಹಂತ ಕಥಾವಸ್ತು : ಪರಿಸರ ಮತ್ತು ವಾತಾವರಣ,...
ಗಾಂಧಿ ಜೀವನದ ನಿಜಘಟನೆಗಳು 10.09.2025 2:58
Writer : ಡಿಎಸ್ಇಆರ್ಟಿ ಪಠ್ಯಪುಸ್ತಕ Narrator : ನಳಿನಾಕ್ಷಿ ಜಿಎಂ Editor : ನಟೇಶಕುಮಾರ್ ಆರ್ ಜಿ ಗಾಂಧೀಜಿ ಅವರ ನೈಜ ಜೀವನದ ಘಟನೆ: ಬಾಪೂಜಿ ಏಕೆ ಅಂಗಿ ತೊಡುವುದಿಲ್ಲ? ಬಾಲಕ ಮತ್ತು ಬಾಪೂಜಿಯ ನಡುವೆ ನಡೆದ ವಿಚಾರ ವಿನಿಮಯ. ಬಾಲಕನ ಸಂದೇಹಕ್ಕೆ ಉತ್ತರವನ್ನು ನೀಡುವ ಕಥೆ ಇದು. ೧. ಬಾಪೂಜಿಯವರಂತೆ ವೇಷ ಧರಿಸಿ, ಅಭಿನಯಿಸುವುದು. ೨.ಗಾಂಧೀಜಿಯವರ ಘೋಷವಾಕ್ಯವನ್ನು ಫ್ಲಾಶ್ ಕಾರ್ಡ್ ನಲ್ಲಿ ಬರೆಯುವುದು. ಇವರಿಗೆ ಸೂಕ್ತ : ಹಿರಿಯ ಪ್ರಾಥಮಿಕ ಹಂತ ಕ...
ಕಾಡಿನ ಜೀವ ಕಾಡು ಪ್ರಾಣಿಗಳಲ್ಲಿದೆ 10.09.2025 3:23
Writer : ಸುಜಿತ್ ಕಾಮತ್ Narrator : ರಾಧಾ Editor : ಡಾ. ಇಂದುಮತಿ ವಿ ಎಂ ಪ್ರಾಣಿಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಹಕ್ಕು. ಪ್ರಾಣಿಗಳು ಇರುವವರೆಗೆ, ಕಾಡಿರುತ್ತದೆ. ಕಾಡು ಇರುವವರೆಗೆ, ಪ್ರಾಣಿಗಳು ಇರುತ್ತವೆ. ೧. ಕಾಡು ಪ್ರಾಣಿಗಳು ಮತ್ತು ಸಾಕುಪ್ರಾಣಿಗಳನ್ನು ಹೆಸರಿಸುವುದು. ೨. ಕಾಡುಪ್ರಾಣಿಗಳು ಮತ್ತು ಸಾಕುಪ್ರಾಣಿಗಳ ನಡುವೆ ವ್ಯತ್ಯಾಸವನ್ನು ಗುರುತಿಸುವುದು. ೩. ಪ್ರಾಣಿಗಳ ಚಿತ್ರಸಂಗ್ರಹಣೆ ಮಾಡುವುದು. ಇವರಿಗೆ ಸೂಕ್ತ : ಪ್ರಾಥಮಿ...
ಕಾಡಿಗೆ ಸ್ವಾಗತ 10.09.2025 10:00
Writer : ಭಾವನಾ ಮೆನನ್ Narrator : ಹನುಮಂತಪ್ಪ ಸಿ Editor : ಕುಮಾರ್ ವೈ ತುಳಸಾ ತನ್ನ ಗೆಳತಿಯರೊಂದಿಗೆ ಕಾಡಿಗೆ ಹೊರಟಿದ್ದಾಳೆ. ಅರಣ್ಯಾಧಿಕಾರಿಗಳ ಜೊತೆ ಈ ಮಕ್ಕಳು ಕಾಡಿನ ವಿಶಿಷ್ಟ ಮತ್ತು ವಿಭಿನ್ನವಾದ ಅನುಭವ ಪಡೆದಿದ್ದು ಹೇಗೆ? ೧. ಕಾಡಿನ ಬಗ್ಗೆ ಚರ್ಚಿಸುವುದು. ೨. ಕಾಡಿನ ಚಿತ್ರವನ್ನು ಬಿಡಿಸಲು ಹೇಳುವುದು. ೩. ಎಲೆಗಳನ್ನುಸಂಗ್ರಹಿಸಿ ಅವುಗಳನ್ನು ಬೇರೆ ಬೇರೆ ಆಕೃತಿಯಲ್ಲಿ ಜೋಡಿಸುವುದು. ಇವರಿಗೆ ಸೂಕ್ತ : ಹಿರಿಯ ಪ್ರಾಥಮಿಕ ಹಂತ ಕಥಾವಸ್ತು : ಪರಿಸರ ಮತ್ತು ವಾತಾವರಣ ಗ...
ಕರುಣೆಯ ಹಾದಿ 10.09.2025 3:25
Writer : ಡಿಎಸ್ಇಆರ್ಟಿ ಪಠ್ಯಪುಸ್ತಕ Narrator : ಕಲ್ಲೇಶ್ವರಪ್ಪ Editor : ಬ್ರಿಜೇಶ್ ಕುಮಾರ್ ಜಿ ವಿ ಆ ಹುಡುಗ ಜನಿಸಿದ್ದು, ಬಂಗಾಳದ ಕಟಕ್ ನಲ್ಲಿ. ಆತ ಜಾನಕೀನಾಥ ಬೋಸ್ ಮತ್ತು ಪ್ರಭಾವತಿ ದೇವಿಯವರ ಒಂಭತ್ತನೇ ಪುತ್ರ. ಒಂದು ದಿನ ತಾಯಿ ಮಗನ ಕೊಠಡಿಗೆ ಬಂದಾಗ ಆಶ್ಚರ್ಯ ಕಾದಿತ್ತು. ಕಪಾಟಿನಿಂದ ಇರುವೆಗಳು ಸಾಲು ಸಾಲಾಗಿ ಹರಿದು ಬರುತ್ತಿದ್ದವು. ಕಪಾಟನ್ನು ತೆರೆದು ನೋಡಿದಾಗ ಪುಸ್ತಕಗಳ ನಡುವೆ ರೊಟ್ಟಿಗಳಿದ್ದವು. ಮುಂದೇನಾಯಿತು? ಈ ಕಥೆಯ ಮೂಲಕ ತಿಳಿಯಿರಿ. ೧....
ಕನಸುಗಾರ ಕಲಾಂ 10.09.2025 4:33
Writer : ಡಿಎಸ್ಇಆರ್ಟಿ ಪಠ್ಯಪುಸ್ತಕ Narrator : ಸರಸ್ವತಿ ಬಿ Editor : ಬಸವರಾಜಪ್ಪ ಎನ್ ಕನಸುಗಳೇ ಆಲೋಚನೆಗಳು,ಕೃತಿ ಆಲೋಚನೆಗಳ ಫಲ ಎಂದು ತೋರಿಸಿಕೊಟ್ಟ ಶ್ರೇಷ್ಠ ವಿಜ್ಞಾನಿ ಅಬ್ದುಲ್ ಕಲಾಂ ರವರ ಕಥೆಯನ್ನು ತಿಳಿದುಕೊಳ್ಳಿ. ೧. ಅಬ್ದುಲ್ ಕಲಾಂ ಅವರ ಚಿತ್ರವನ್ನು ರಚಿಸಿ, ಅವರ ಬಗ್ಗೆ ಬರೆಯುವುದು. ೨. ತಮ್ಮ ಕನಸುಗಳನ್ನು ಸ್ನೇಹಿತರ ಜೊತೆ ಹಂಚಕೊಳ್ಳುವುದು ಅಥವಾ ಬರಹ ರೂಪದಲ್ಲಿ ವ್ಯಕ್ತ ಪಡಿಸುವುದು. ಇವರಿಗೆ ಸೂಕ್ತ : ಹಿರಿಯ ಪ್ರಾಥಮಿಕ ಹಂತ ಕಥಾವಸ್ತು : ಕಲೆ ಮತ್ತು ಸಂಸ್ಕ್ರುತ...
ಒಟ್ಟಿಗೆ ಬಾಳುವಿನ ಆನಂದ 10.09.2025 4:41
Writer : ಡಿಎಸ್ಇಆರ್ಟಿ ಪಠ್ಯಪುಸ್ತಕ Narrator : ಸರಸ್ವತಿ ಬಿ Editor : ಹೇಮಂತ್ ಕುಮಾರ್ ಬಿ ಜೆ ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
ಒಟ್ಟಿಗೆ ಬಾಳುವ ಆನಂದ 10.09.2025 4:41
Writer : ಡಿಎಸ್ಇಆರ್ಟಿ ಪಠ್ಯಪುಸ್ತಕ Narrator : ಸರಸ್ವತಿ ಬಿ Editor : ಹೇಮಂತ್ ಕುಮಾರ್ ಬಿ ಜೆ ಒಂದು ಹಳ್ಳಿ, ಅಲ್ಲಿ ರೈತನೊಬ್ಬನ ಹೊಲ ಇತ್ತು. ಅಲ್ಲಿ ಒಂದು ಬೇವಿನ ಮರವಿತ್ತು. ಹೇಗೋ ಏನೋ ಅದರ ಕೆಳಗೆ ಒಂದು ಗುಂಡನೆಯ ಕಲ್ಲು ಬಂದು ನಿಂತುಕೊಂಡಿತು. ‘ಒಗ್ಗಟ್ಟಿನಲ್ಲಿ ಬಲವಿದೆ’ ಎಂಬ ಗಾದೆ ಮಾತು ಹೇಗೆ ಅನ್ವಯವಾಗುತ್ತದೆ ಮತ್ತು ನಮ್ಮ ನಮ್ಮ ನಡುವೆ ಇರುವ ದ್ವೇಷ ಅಸೂಯೆಗಳನ್ನು ಮರೆತು ಎಲ್ಲರನ್ನೂ ಪ್ರೀತಿಸುತ್ತಾ ಬಾಳಿದರೆ ಬದುಕು ಸುಖಮಯವಾಗಿರುತ್ತದೆ. ಎಂಬ ಉತ್ತಮ ನೀತಿಕಥೆಯನ್ನು ನೀವು ಕ...
ಒಂಟೆಯ ಬಯಸಿದ ಕೆಲಮ್ 10.09.2025 6:03
Writer : ಅನು ಚೌಧರಿ-ಸೊರಾಬ್ಜಿ Narrator : ಮಲ್ಲಿಕಾರ್ಜುನಪ್ಪ. ಹೆಚ್.ಒ. Editor : ದಿನೇಶ ಎಲ್ ಪಬುನ ಸೋದರ ಸೊಸೆ ಕೇಲಂ ತನ್ನ ಹುಟ್ಟುಹಬ್ಬಕ್ಕೆ ಒಂಟೆ ಬೇಕೆಂದು ಕೇಳಿದಳು. ಪಬು ಒಂಟೆಗಾಗಿ ರಾಜಸ್ತಾನದಿಂದ ಲಂಕಾದವರೆಗೆ ಪ್ರಯಾಣಿಸಿದ. ಅವನ ಈ ಪ್ರಯಾಣ ಅವನನ್ನು ಎಲ್ಲಿಗೆ ಕರೆದುಕೊಂಡು ಹೋಗಿತು ನೋಡಿ. ೧. ಕಥೆಗೆ ಸಂಬಂಧಿಸಿ ಸರಳ ಪ್ರಶ್ನೆಗಳನ್ನು ಕೇಳಿ. ೨.ರಾಜಸ್ತಾನವನ್ನು ನಕ್ಷೆಯಲ್ಲಿ ಗುರುತಿಸಿ. ೩. ಮಕ್ಕಳಿಗೆ ಒಂಟೆಯ ಬಗ್ಗೆ ಆಸಕ್ತಿದಾಯಕ ಮಾಹಿತಿ ನೀಡಿ (ಅದು ಯಾವ ಪರಿಸರದ...
ಇರುವೆ ಮತ್ತು ಹಸಿರು ಹೆಸರುಕಾಳು 10.09.2025 4:16
Writer : ಸರ್ವೇಂದ್ರ ವಿಕ್ರಮ್ Narrator : ಎಲ್ಲಪ್ಪ Editor : ಮಹಾಂತೇಶ್ ಎಸ್ ಕುಂಬಾರ್ ಒಂದು ಪುಟ್ಟ ಇರುವೆಗೆ ಮೊಳಕೆಯೊಡೆದ ದಪ್ಪನೆಯ ಹಸಿರು ಹೆಸರುಕಾಳು ಸಿಗುತ್ತದೆ. ಅದನ್ನು ಮನೆಗೆ ತೆಗೆದುಕೊಂಡು ಹೋಗಬೇಕೆಂದು ಇರುವೆಗೆ ಆಸೆ. ಆದರೆ ದಾರಿಯಲ್ಲಿ ಅನೇಕ ತೊಂದರೆಗಳು ಎದುರಾಗುತ್ತವೆ. ಕಾಳನ್ನು ತೆಗೆದುಕೊಂಡು ಹೋಗಲು ಇರುವೆಗೆ ಸಾಧ್ಯವಾಗುತ್ತದೆಯೇ? ಇರುವೆಯನ್ನು ಹಿಂಬಾಲಿಸಿ ಹೋಗಿ ತಿಳಿದುಕೊಳ್ಳಿರಿ. ೧. ಬೇರೆ ಬೇರೆ ವಿಧದ ಧಾನ್ಯಗಳನ್ನು ಸಂಗ್ರಹಿಸುವುದು ಮತ್ತು ಅದನ್ನು ತರಗತಿಯಲ್ಲಿ ಗುರು...
ಆಹಾ ಎಲ್ಲವೂ ಹೊಸತೂ 10.09.2025 4:04
Writer : ಮಾಲಾ ಕುಮಾರ್ಮ ನಿಷಾ ಚೌಧರಿ Narrator : ಶೋಭಾ ಪೂಜಾರಿ, ಸಂತೋಷ ಭೀಮಣ್ಣ Editor : ವಿಜಯ ಕುಮಾರ್ ಮೀನುವಿನ ಸುತ್ತಲು ಹಲವಾರು ಹೂಗಳು, ಹಲವಾರು ಬಣ್ಣಗಳು, ಪಕ್ಷಿಗಳು ಮತ್ತು ಅಳಿಲುಗಳು ಕಿಚಿಪಿಚಿಗುಟುತ್ತಾ, ಚಿಲಿಪಿಲಿ ಎನ್ನುತ್ತಾ ಓಡಾಡುವ ಮನಸೆಳೆಯುವ ವಾತಾವರಣ ಇದೆ. ಮೀನು ಪ್ರಕೃತಿಯ ಈ ಚೆಲುವಿನಲ್ಲಿ ಮುಳುಗಿಹೋಗಿದ್ದಾಳೆ. ಎಷ್ಟೇ ಆದರೂ ಇದು ವಸಂತಕಾಲ ಅಲ್ಲವೇ? ೧. ಕಾಲಗಳನ್ನು ಪಟ್ಟಿ ಮಾಡಿ, ಅವುಗಳ ವಿಶೇಷತೆಯನ್ನು ಚರ್ಚಿಸುವುದು. ೨. ಕಾಲಗಳ ಚಿತ್ರವನ್ನು ಬಿಡಿಸಿ ಬಣ್ಣ...
ಆಸೆ ಅರಿವು 10.09.2025 4:00
Writer : ನೇತ್ರಾವತಿ ರಾಂಪುರ Narrator : ನೇತ್ರಾವತಿ ರಾಂಪುರ, ಲಕ್ಷ್ಮಿ, ಲಲಿತಾ, ರಾಘವೇಂದ್ರ ಕುಲಕರ್ಣಿ, ಯಶವಂತ ಕಾಳೆ Editor : ಪರ್ವಿನ್ ಸುಲ್ತಾನಾ ಶಾಲೆಗೆ ರಜಾದಿನ. ಮಕ್ಕಳೆಲ್ಲರೂ ಅಜ್ಜಿಯ ತೋಟದಲ್ಲಿಮರದ ಆಟ ಆಟವಾಡುತ್ತಿದ್ದರು. ಆಟವಾಡುತ್ತಾ ಯಾವುದಕ್ಕಾಗಿ ಆಸೆ ಪಟ್ಟಿರು ಮತ್ತು ಯಾವ ಸುರಕ್ಷಿತ ಕ್ರಮದ ಬಗ್ಗೆ ತಿಳಿದುಕೊಂಡರು ಎಂಬುದನ್ನು ಈ ಕಥೆಯ ಮೂಲಕ ತಿಳಿಯಿರಿ. ೧. ರಜಾದಿನಗಳ ಅನುಭವಗಳನ್ನುಹಂಚಿಕೊಳ್ಳುವುದು. ಇವರಿಗೆ ಸೂಕ್ತ : ಪ್ರಾಥಮಿಕ ಹಂತ ಕಥಾವಸ್ತು : ದಿನಚರಿ ಮತ್ತು ದೈನಂ...
ಆರೋಗ್ಯವೇ ಭಾಗ್ಯ 10.09.2025 5:54
Writer : ಗಿಟಿ ತ್ಯಾಗಿ Narrator : ಲಕ್ಷ್ಮಣ ನಾಯಕ್ ಆರ್.ಪಿ. Editor : ಪ್ರಶಾಂತ್ ಎಸ್ ಈ ಕಥೆಯಲ್ಲಿ ಸಾತ್ವಿಕ ಆಹಾರ ಮತ್ತು ಸುಖಮಯವಾದ ಜೀವನದ ಚಿತ್ರಣವಿದೆ. ಓದಿ ತಿಳಿಯಿರಿ ೧. ಸಾತ್ವಿಕ ಆಹಾರದ ಬಗ್ಗೆ ತಿಳಿಸುವುದು. ೨. ಪ್ರತಿ ದಿನದ ಆಹಾರಕ್ರಮವನ್ನು ಗಮನಿಸಲು ಹೇಳುವುದು ಮತ್ತು ಬರೆಯುವುದು. ಇವರಿಗೆ ಸೂಕ್ತ : ಹಿರಿಯ ಪ್ರಾಥಮಿಕ ಹಂತ ಕಥಾವಸ್ತು : ಕರುಣೆ ಮತ್ತು ಕಾಳಜಿ,ಕುಟುಂಬ ಗುರುತು ಪಟ್ಟಿ : ತರಗತಿ ೫,ತರಗತಿ ೬,ತರಗತಿ ೭ ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
ಅಸಿಲಾ ಬಸಿಲ ಉತಿಲಾ ಜಾವುಚಾ 10.09.2025 4:58
Writer : ಕುಯಿ ಬರಹಗಾರರ ಗುಂಪು Narrator : ಸಂಜಯಕುಮಾರ್.ಆರ್.ಬಿ Editor : ಪ್ರೇಮಾ ಪಿ ಸ್ವಾಮಿ ಸೋಮ ಒಡಿಯಾ ಕಲಿಯಲು ತನ್ನ ಹೊಸ ಗೆಳೆಯನ ಹತ್ತಿರ ಹೋದನು. ಅವನು ಕಲಿತ ಪದಗಳಿಂದ ಬಹಳ ಉಪಯೋಗವಾಯಿತು. ಹೇಗೆ ಎಂದು ತಿಳಿಯಲು ಈ ಕತೆ ಓದಿ. ೧. ಕಥೆಯಲ್ಲಿ ಬರುವ ಪದಗಳನ್ನು ಬರೆದು, ಅದರ ಅರ್ಥವನ್ನು ತಿಳಿದು ,ಓದಲು ಹೇಳುವುದು ಮತ್ತು ಅದನ್ನು ಉಚ್ಛರಿಸುವುದು. ಇವರಿಗೆ ಸೂಕ್ತ : ಪ್ರಾಥಮಿಕ ಹಂತ ಕಥಾವಸ್ತು : ಬುದ್ಧಿವಂತಿಕೆ ಮತ್ತು ಚತುರತೆ ಗುರುತು ಪಟ್ಟಿ : ತರಗತಿ ೧,ತರಗತಿ ೨,ತರಗತಿ ೩,ತರಗತಿ...
ಅರ್ಧ ಆಣೆ ಕೋಟಿ ರೂಪಾಯಿಗಿಂತ ಹೆಚ್ಚಿನದು 10.09.2025 3:20
Writer : ಡಿಎಸ್ಇಆರ್ಟಿ ಪಠ್ಯಪುಸ್ತಕ Narrator : ನಳಿನಾಕ್ಷಿ ಜಿಎಂ Editor : ಶಿವರಾಜ ವಿ ಎ ಮಹಾತ್ಮಾಗಾಂಧಿಜಿಯವರ ನೈಜ ಜೀವನದ ಕಥೆ. ೧. ಮಹಾತ್ಮಾಗಾಂಧೀಜಿಯವರ ಬಾಲ್ಯ, ಯುವಾವಸ್ಥೆ, ಸತ್ಯಾಗ್ರಹ ಪ್ರಯತ್ನಗಳನ್ನು ಓದಿ ಕಥೆಯನ್ನು ಚರ್ಚಿಸಿ. ೨.ನೈತಿಕ ಮೌಲ್ಯಗಳ ಬಗ್ಗೆ ಅರ್ಥೈಸಿಕೊಳ್ಳುವುದು ಕಥಾವಸ್ತು : ಇತಿಹಾಸ,ಜೀವನ ಕೌಶಲ್ಯ ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
ಅನ್ನದ ಹಂಗು ಅನ್ಯರ ಸ್ವತ್ತು 10.09.2025 7:29
Writer : ಡಿಎಸ್ಇಆರ್ಟಿ ಪಠ್ಯಪುಸ್ತಕ Narrator : ಮಲ್ಲಿಕಾರ್ಜುನಪ್ಪ. ಹೆಚ್.ಒ. Editor : ತಿಪ್ಪೇಸ್ವಾಮಿ ಆರ್ ಮಹಾಭಾರತದ ಕಥೆ. ಮಂತ್ರ ದೇಶದ ಶಲ್ಯ ಯಾವ ರೀತಿಯಲ್ಲಿ ಉಭಯ ಸಂಕಟಕ್ಕೆ ಸಿಲುಕಿ ಕೊಳ್ಳುತ್ತಾನೆ ಮತ್ತು ಅದರಿಂದ ಹೇಗೆ ಪಾರಾಗುತ್ತಾನೆ ಎಂದು ತಿಳಿಯಬೇಕೆ? ೧. ಈ ಕಥೆಯನ್ನು ನಾಟಕ ರೂಪದಲ್ಲಿ ಅಭಿನಯಿಸುವುದು. ೨.ಪದಗಳನ್ನು ರಚಿಸುವುದು. ಇವರಿಗೆ ಸೂಕ್ತ : ಹಿರಿಯ ಪ್ರಾಥಮಿಕ ಹಂತ ಕಥಾವಸ್ತು : ಇತಿಹಾಸ,ಬುದ್ಧಿವಂತಿಕೆ ಮತ್ತು ಚತುರತೆ ಗುರುತು ಪಟ್ಟಿ : ತರಗತಿ ೫,ತರಗ...
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.