JSS
ಚಿನ್ನದ ಚೆನ್ನುಡಿಗೆ ಅಮೃತ ಸಿಂಚನ ಪಾಡ್ಕಾಸ್ಟ್ ಕಾರ್ಯಕ್ರಮ
ಜನತಾ ಶಿಕ್ಷಣ ಸಮಿತಿಯ ನೂತನ ಆಡಳಿತ ಮಂಡಳಿಯ 50 ನೇ ವರ್ಷ ಹಾಗೂ ಪೂಜ್ಯ ಡಾ.ಡಿ. ವಿರೇಂದ್ರ ಹೆಗ್ಗಡೆಯವರ 75 ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಖಾವಂದರ ಚೆನ್ನುಡಿ ಕೃತಿಯ 75 ಆಯ್ದ ಕಥೆಗಳನ್ನು ಪುಟಾಣಿ ಮಕ್ಕಳು ತಮ್ಮ ತೊದಲು ನುಡಿಗಳಲ್ಲಿ ಕಥೆ ಹೇಳುತ್ತಾರೆ. ಪರಿಕಲ್ಪನೆ ಮತ್ತು ಪ್ರಸ್ತುತಿ - ಶ್ರೀಮತಿ ಉಷಾ ಸಂತೋಷ, ಪ್ರಾಚಾರ್ಯರುಸಂಗೀತ ಸಂಯೋಜನೆ ಕು. ಶಿಲ್ಪಾ ಒಂಟಿಗೋಡಿಮಠ, ಸಂಗೀತ ಶಿಕ್ಷಕಿತಾಂತ್ರಿಕ ಸಹಕಾರ -1.ಶ್ರೀ ರವೀಂದ್ರ ಕೋಮಾರ್, ಸಂಸ್ಕೃತ ಶಿಕ್ಷಕರು 2.ಶ್ರೀ ರಾಮಕೃಷ್ಣ ಶಿರೋಮಣಿ, ಗಣಿತ ಶಿಕ್ಷಕರುನಿರೂಪಕರು - 1. ಶ್ರೀಮತಿ ಭಾರತಿ ರಾ ನೀರಲಕಟ್ಟಿ2. ಶ್ರೀಮತಿ ರಶ್ಮಿ ರ ಕುಲಕರ್ಣಿಸಹಶಿಕ್ಷಕಿಯರು
Hol hallgathatod?
Podcastok az alkalmazásban Replaio Radio HamarosanA podcastok hamarosan megérkeznek az alkalmazásba. Telepítsd most, és láss elsőként egy teljesen új megközelítést a podcastokhoz
Epizódok
ಸಂಚಿಕೆ –75: 25.11.2023 6:03
ಸಂಚಿಕೆ – 75: – ಚೆನ್ನುಡಿ ಪುಸ್ತಕ ಭಾಗ- 6ರ 62 ನೆಯ ಕಥೆ ನಿಜವಾದ ಪ್ರಾರ್ಥನೆ ಈ ಕಥೆಯ ನೀತಿ – ಕೇವಲ ಭಗವಂತನನ್ನು ಸ್ಮರಿಸಿ ಸೇವೆ ಸಲ್ಲಿಸುವುದು ನಿಜವಾದ ಪ್ರಾರ್ಥನೆಯಲ್ಲಿ ಬಡವರು ಅನಾಥರು ಮತ್ತು ರೋಗಿಗಳಿಗೆ ಸಹಾಯ ಮತ್ತು ಸೇವೆ ಮಾಡುವುದು ನಿಜವಾದ ಪ್ರಾರ್ಥನೆಯಾಗಿದೆ.
ಸಂಚಿಕೆ –74: 25.11.2023 4:12
ಸಂಚಿಕೆ – 74: – ಚೆನ್ನುಡಿ ಭಾಗ – 5 ರ 102ನೇ ಅಂಕಣದಲ್ಲಿ, ‘ಉದಾರ ಹೃದಯದ ಫಲ.’ ಈ ಕಥೆಯ ನೀತಿ – ಅನ್ನದಾನಕ್ಕಿಂತ ಅನ್ನದಾನವಿಲ್ಲ, ಉದಾರ ಹೃದಯಗಳಿಂದಾಗಿ ಈ ಜಗತ್ತು ಸುಖ ಕ್ಷೇಮದಿಂದ ಇರಲು ಸಾಧ್ಯವಾಗಿದೆ. ಭಗವಂತನ ಅನುಗ್ರಹದಿಂದ ಒಳ್ಳೆಯ ಮಳೆ ಬೆಳೆಗಳು ದೊರೆಯುತ್ತವೆ.
ಸಂಚಿಕೆ –73: 25.11.2023 4:31
ಸಂಚಿಕೆ – 73: – ಚೆನ್ನುಡಿ ಪುಸ್ತಕ ಭಾಗ- 6ರ 56 ನೆಯ ಕಥೆ ಮನಃಶಾಂತಿ ಮುಖ್ಯ, ಈ ಕಥೆಯ ನೀತಿ – ಜೀವನದಲ್ಲಿ ಮನಸ್ಸಿನ ಶಾಂತಿ, ನೆಮ್ಮದಿ ಮತ್ತು ಸಂತೃಪ್ತಿಗಳು ಬಹಳ ಮುಖ್ಯ ಇವುಗಳನ್ನು ಬೇಡಿ ದೇವರಿಗೆ ಧನ್ಯವಾದ ಅರ್ಪಿಸಬೇಕು.
ಸಂಚಿಕೆ –72: 24.11.2023 5:56
ಸಂಚಿಕೆ – 72: – ಚೆನ್ನುಡಿ ಭಾಗ – 5 ರ 101ನೇ ಅಂಕಣದಲ್ಲಿ ‘ಸಮಸ್ಯೆಗಳಿಗೆ ಅಂಜಬೇಡಿ’, ಈ ಕಥೆಯ ನೀತಿ – ನಾವು ಯಾವಾಗಲೂ ಧೈರ್ಯವಂತರಾಗಿರಬೇಕು, ಸಮಸ್ಯೆಗಳು ಬಂದಾಗ ಯೋಗ್ಯವಾದ ವ್ಯಕ್ತಿಗಳ ಸಲಹೆ ಮಾರ್ಗದರ್ಶನ ಪಡೆದು, ಇಡೀ ಸಮಾಜಕ್ಕೆ, ರಾಷ್ಟ್ರಕೆ ಮಾದರಿಯಾಗಿ ಬದುಕಬೇಕು,
ಸಂಚಿಕೆ –71: 24.11.2023 4:29
ಸಂಚಿಕೆ – 71: – ಚೆನ್ನುಡಿ ಪುಸ್ತಕ ಭಾಗ- 6ರ 30 ನೆಯ ಕಥೆ ಇತರರ ದುಃಖಗಳಿಗೆ ಕರಗುವವರು. ಈ ಕಥೆಯ ನೀತಿ – ಮನಸ್ಸಿನಲ್ಲಿ ಕರುಣೆ ಮತ್ತು ಉದಾರ ಗುಣಗಳನ್ನು ಹೊಂದಿದ ಜನರು ಆದರ್ಶ ವ್ಯಕ್ತಿಗಳಾಗಿ ಬಾಳುತ್ತಾರೆ.
ಸಂಚಿಕೆ –70: 24.11.2023 5:21
ಸಂಚಿಕೆ – 70: – ಚೆನ್ನುಡಿ ಭಾಗ – 5 ರ 99ನೇ ಅಂಕಣದಲ್ಲಿ ‘ನೈತಿಕ ಬಲವೇ ಶ್ರೇಷ್ಠ. ಈ ಕಥೆಯ ನೀತಿ – ಶಕ್ತಿಗಿಂತ ಯುಕ್ತಿ ಮೇಲು, ನೈತಿಕ ಬಲ ಉಳ್ಳವನಿಗೆ ಆತ್ಮ ಬಲ ಮತ್ತು ದೈವಬಲದ ಬೆಂಬಲ ಇದ್ದೆ ಇರುತ್ತದೆ ಗೆಳೆಯರೇ ನೈತಿಕ ಬಲದಿಂದ ಸಮರ್ಥರಾಗಿ ಎದ್ದು ನಿಲ್ಲಲು ಕಲಿಯೋಣ ಹಾಗೂ ಎಲ್ಲಾ ಸಮಸ್ಯೆಗಳನ್ನು ಎದುರಿಸಲು ಕಲಿಯೋಣ.
ಸಂಚಿಕೆ –69: 24.11.2023 6:07
ಸಂಚಿಕೆ – 69: – ಚೆನ್ನುಡಿ ಪುಸ್ತಕ ಭಾಗ- 6ರ 13 ನೆಯ ಕಥೆ ಸುದೀರ್ಘ ಆಯುಷ್ಯದ ಗುಟ್ಟು ಈ ಕಥೆಯ ನೀತಿ – ಜೀವನದಲ್ಲಿ ಉತ್ತಮವಾದ ಆಚಾರ ವಿಚಾರಗಳು ಮತ್ತು ಸರಳವಾದ ಸ್ವಭಾವವನ್ನು ಹೊಂದಿದವರು ದೀರ್ಘ ಆಯಸ್ಸನ್ನು ಗಳಿಸುತ್ತಾರೆ.
ಸಂಚಿಕೆ –68: 24.11.2023 4:58
ಸಂಚಿಕೆ – 68: – ಚೆನ್ನುಡಿ ಭಾಗ – 5 ರ 73ನೇ ಅಂಕಣದಲ್ಲಿ ‘ಮಾತಿನಂತೆ ನಡವಳಿಕೆಯಿರಲಿ.’ ಈ ಕಥೆಯ ನೀತಿ – ಹೇಳೋದು ಶಾಸ್ತ್ರ ಇಕೋದು ಗಾಳ ಉಪದೇಶ ನೀಡಿದವನ ಬದುಕಿನಲ್ಲಿ, ಅಂತಹ ತತ್ವ ಆದರ್ಶಗಳ ಪಾಲನೆ ಇಲ್ಲವೆಂದಾದರೆ ಆತನ ಉಪದೇಶಕ್ಕೆ ಚಿಕ್ಕಾಸಿನ ಬೆಲೆ ಇಲ್ಲ.
ಸಂಚಿಕೆ –67: 24.11.2023 5:16
ಸಂಚಿಕೆ – 67: – ಚೆನ್ನುಡಿ ಪುಸ್ತಕ ಭಾಗ- 6ರ 43 ನೆಯ ಕಥೆ “ಹೃದಯ ಪರಿವರ್ತನೆ ಮುಖ್ಯ” ಈ ಕಥೆಯ ನೀತಿ – ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸುವ ಬದಲು ಶಿಕ್ಷಣ ನೀಡಬೇಕು, ಶಿಕ್ಷಣದಿಂದ ಅವರ ಹೃದಯವನ್ನು ಪರಿವರ್ತನೆ ಮಾಡುವುದು ಉತ್ತಮ,
ಸಂಚಿಕೆ –66: 24.11.2023 4:49
ಸಂಚಿಕೆ – 66: – ಚೆನ್ನುಡಿ ಭಾಗ – 5 ರ 93ನೇ ಅಂಕಣದಲ್ಲಿ, ‘ವಿದ್ಯೆಯ ಗುರಿಯೇನು?’ ಈ ಕಥೆಯ ನೀತಿ – ವಿದ್ಯಾ ದದಾತಿ ವಿನಯಂ ಎಂಬ ಮಾತಿನಂತೆ ವಿದ್ಯೆಯೊಡನೆ ವಿನಯವೂ ಇರಬೇಕು, ಮಾನವನಿಗೆ ಬಿಡುಗಡೆಯ ದಾರಿಯನ್ನು ಯಾವುದು ತೋರಬಲ್ಲದೋ ಅದೇ ವಿದ್ಯೆಯೆಂದು ಗಾಂಧೀಜಿ ನಂಬಿದ್ದರು.
Hasonló podcastok
A Replaio nem podcastkiadó; a műsorok nevei, borítóképei és hanganyagai a szerzőiket illetik, és nyilvános RSS-csatornákon keresztül terjednek.